<p><strong>ಬೆಂಗಳೂರು</strong>: ‘ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ತಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಅವರು ರಾಜಕೀಯದಲ್ಲಿ ಮುಂಚೂಣಿಗೆ ತರಲಿಲ್ಲ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ತೇಜು ಪ್ರಕಾಶನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರ್. ಉಮಾ ಶರ್ಮಾ ಅವರು ಹಿಂದಿ ಭಾಷೆಗೆ ಅನುವಾದಿಸಿರುವ ‘ದೂರದರ್ಶಿ ರಾಜನೇತ ಎಸ್. ನಿಜಲಿಂಗಪ್ಪ’ ಪುಸ್ತಕವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. </p>.<p>‘ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಿಜಲಿಂಗಪ್ಪ ಅವರು, ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಅವರು ಮಾದರಿಯಾಗಿದ್ದಾರೆ. ಈ ನಾಡಿಗೆ ಅವರು ಅಪಾರ ಕೊಡುಗೆ ನೀಡಿದ್ದು, ರಾಜಕೀಯದ ಮಿತಿ ಮೀರಿ ಉದಾತ್ತ ಚಿಂತನೆ ಬೆಳೆಸಿಕೊಂಡಿದ್ದರು’ ಎಂದು ಹೇಳಿದರು. </p>.<p>ಕೃತಿಯ ಇಂಗ್ಲಿಷ್ ಅನುವಾದಕ ಎನ್. ರಾಮನಾಥ್, ‘ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿ ಕಾಂಗ್ರೆಸ್ ಪಕ್ಷಕ್ಕೆ ಸುವರ್ಣಯುಗವಾಗಿತ್ತು. ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿತು. ನಿಜಲಿಂಗಪ್ಪ ಅವರು ತಮ್ಮ ತಟ್ಟೆಯಲ್ಲಿ ಅನ್ನದ ಒಂದು ಅಗಳನ್ನೂ ಬಿಡದೆ ತಿನ್ನುತ್ತಿದ್ದರು. ಆದರೆ, ಈಗಿನ ರಾಜಕಾರಣಿಗಳು ಬೇರೆಯವರ ತಟ್ಟೆಯಲ್ಲಿರುವ ಒಂದು ಅಗಳನ್ನೂ ಬಿಡದೆ ನುಂಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ಮಾಜಿ ಸಚಿವೆ ರಾಣಿ ಸತೀಶ್, ‘ನಿಜಲಿಂಗಪ್ಪ ಅವರು ಅಪರೂಪದ ರಾಜಕಾರಣಿ. ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಅವರ ಹಾದಿಯಲ್ಲಿ ಈಗಿನ ರಾಜಕಾರಣಿಗಳು ನಡೆಯಬೇಕು’ ಎಂದು ಹೇಳಿದರು. </p>.<p>ಅನುವಾದಕಿ ಆರ್.ಉಮಾ ಶರ್ಮಾ, ‘ಈ ಕೃತಿಯ ಅನುವಾದದಿಂದ ನನಗೆ ನಿಜಲಿಂಗಪ್ಪ ಅವರ ಜೀವನ ಶೈಲಿಯ ಬಗ್ಗೆ ತಿಳಿಯಲು ಸಾಧ್ಯವಾಯಿತು’ ಎಂದರು. </p>.<p>ಸುಮಂಗಲಿ ಸೇವಾಶ್ರಮದ ಸಂಸ್ಥಾಪನಾ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಅವರನ್ನು ಇದೇ ವೇಳೆ ಗೌರವಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ತಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಅವರು ರಾಜಕೀಯದಲ್ಲಿ ಮುಂಚೂಣಿಗೆ ತರಲಿಲ್ಲ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ತೇಜು ಪ್ರಕಾಶನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರ್. ಉಮಾ ಶರ್ಮಾ ಅವರು ಹಿಂದಿ ಭಾಷೆಗೆ ಅನುವಾದಿಸಿರುವ ‘ದೂರದರ್ಶಿ ರಾಜನೇತ ಎಸ್. ನಿಜಲಿಂಗಪ್ಪ’ ಪುಸ್ತಕವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. </p>.<p>‘ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಿಜಲಿಂಗಪ್ಪ ಅವರು, ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಅವರು ಮಾದರಿಯಾಗಿದ್ದಾರೆ. ಈ ನಾಡಿಗೆ ಅವರು ಅಪಾರ ಕೊಡುಗೆ ನೀಡಿದ್ದು, ರಾಜಕೀಯದ ಮಿತಿ ಮೀರಿ ಉದಾತ್ತ ಚಿಂತನೆ ಬೆಳೆಸಿಕೊಂಡಿದ್ದರು’ ಎಂದು ಹೇಳಿದರು. </p>.<p>ಕೃತಿಯ ಇಂಗ್ಲಿಷ್ ಅನುವಾದಕ ಎನ್. ರಾಮನಾಥ್, ‘ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿ ಕಾಂಗ್ರೆಸ್ ಪಕ್ಷಕ್ಕೆ ಸುವರ್ಣಯುಗವಾಗಿತ್ತು. ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿತು. ನಿಜಲಿಂಗಪ್ಪ ಅವರು ತಮ್ಮ ತಟ್ಟೆಯಲ್ಲಿ ಅನ್ನದ ಒಂದು ಅಗಳನ್ನೂ ಬಿಡದೆ ತಿನ್ನುತ್ತಿದ್ದರು. ಆದರೆ, ಈಗಿನ ರಾಜಕಾರಣಿಗಳು ಬೇರೆಯವರ ತಟ್ಟೆಯಲ್ಲಿರುವ ಒಂದು ಅಗಳನ್ನೂ ಬಿಡದೆ ನುಂಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ಮಾಜಿ ಸಚಿವೆ ರಾಣಿ ಸತೀಶ್, ‘ನಿಜಲಿಂಗಪ್ಪ ಅವರು ಅಪರೂಪದ ರಾಜಕಾರಣಿ. ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಅವರ ಹಾದಿಯಲ್ಲಿ ಈಗಿನ ರಾಜಕಾರಣಿಗಳು ನಡೆಯಬೇಕು’ ಎಂದು ಹೇಳಿದರು. </p>.<p>ಅನುವಾದಕಿ ಆರ್.ಉಮಾ ಶರ್ಮಾ, ‘ಈ ಕೃತಿಯ ಅನುವಾದದಿಂದ ನನಗೆ ನಿಜಲಿಂಗಪ್ಪ ಅವರ ಜೀವನ ಶೈಲಿಯ ಬಗ್ಗೆ ತಿಳಿಯಲು ಸಾಧ್ಯವಾಯಿತು’ ಎಂದರು. </p>.<p>ಸುಮಂಗಲಿ ಸೇವಾಶ್ರಮದ ಸಂಸ್ಥಾಪನಾ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಅವರನ್ನು ಇದೇ ವೇಳೆ ಗೌರವಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>