‘ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಪೂರ್ಣಗೊಂಡ ಕೂಡಲೇ ಒಕ್ಕಲಿಗರಿಗೆ ಇರುವ ತೊಂದರೆಗಳು, ಬೇಕಾಗಿರುವ ಸವಲತ್ತುಗಳ ಬಗ್ಗೆ ಸರ್ಕಾರಕ್ಕೆ ಸವಿಸ್ತಾರ ಬೇಡಿಕೆ ಸಲ್ಲಿಸಲಾಗುವುವುದು. ಒಕ್ಕಲಿಗರ ಧ್ವನಿಗೆ ಸಂಚಕಾರ ಬರುವ ದಿನಗಳು ಕಾಣಿಸುತ್ತಿವೆ. ಹೀಗಾಗಿ, ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ. ಕಾನೂನಿನ ಇತಿಮಿತಿಯಲ್ಲಿ ಬೇಡಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳು ನಡೆಯುತ್ತಿವೆ’ ಎಂದು ಹೇಳಿದರು.