ಪ್ರತಿಭಟನೆಗೆ ಅನುಮತಿ ಕೋರಿ ವೇದಿಕೆಯ ಸಂಚಾಲಕ ಶಂಕರ್ ಹೂಗಾರ ಸಲ್ಲಿಸಿದ್ದ ಮನವಿ ಪತ್ರಕ್ಕೆ ಹಿಂಬರಹ ನೀಡಿರುವ ಪೊಲೀಸರು, ‘ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶವಿದೆ. ಉಳಿದಂತೆ, ನಗರದ ಯಾವ ಭಾಗದಲ್ಲೂ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಹೀಗಾಗಿ, ನಿಮ್ಮ ಪ್ರತಿಭಟನೆಗೆ ಅವಕಾಶ ನೀಡಲಾಗದು’ ಎಂದಿದ್ದಾರೆ.