ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲಮನ್ನಾ ಮಾಡುವೆ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಾನು ಸಿ.ಎಂ ಆದರೆ ಜನಸಂಖ್ಯ ನಿಯಂತ್ರಣ, ಬಡವ–ಸಿರಿವಂತರ ನಡುವೆ ಸಮಾನತೆ ತರುವುದಕ್ಕೆ ಒತ್ತು ಕೊಡುತ್ತೇನೆ. ಯುವಜನರು ಸೇನೆಗೆ ಸೇರುವ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡುತ್ತೇನೆ. ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸುವೆ. ಹಳ್ಳಿಯಲ್ಲಿ ಎಲ್ಲರ ಮನೆಗಳಿಗೂ ವಿದ್ಯುತ್‌ ಸೌಲಭ್ಯ ನೀಡುವೆ. ಪ್ರತಿ ಮನೆಗೂ ಶೌಚಾಲಯ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಮಳೆನೀರು ಇಂಗಿಸುವುದರ ಜತೆಗೆ ರೈತರ ಸಾಲಮನ್ನಾ ಮಾಡುವೆ.

ಸರ್ಕಾರಿ ಶಾಲೆಗಳಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸುವೆ. ಹಳ್ಳಿಹಳ್ಳಿಗೂ ಟಾರ್ ರಸ್ತೆ, ಎಟಿಎಂ ವ್ಯವಸ್ಥೆ ಕಲ್ಪಿಸುವೆ. ರೈತರಿಗೆ ಬಡ್ಡಿರಹಿತ ಸಾಲ ನೀಡುವೆ. ಕಡಿಮೆ ದರದಲ್ಲಿ ಒಳ್ಳೆಯ ಬಿತ್ತನೆಬೀಜ ದೊರೆಯುವಂತೆ ಮಾಡುವೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58ಕ್ಕೆ ಇಳಿಸುವುದರ ಮೂಲಕ ಯುವಕರಿಗೆ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗುವಂತೆ ಮಾಡುವೆ. ಸರ್ಕಾರಿ ಕಚೇರಿಯಲ್ಲಿ ಲಂಚ ನಿರ್ಮೂಲನೆ ಮಾಡುವೆ.

ಪ್ರತಿ ಯುವಕನೂ ದುಡಿದು ತಿನ್ನುವಂತೆ ಮಾಡುವೆ. ಯಾರಿಗೂ ಉಚಿತವಾಗಿ ಆಹಾರ ಸಾಮಗ್ರಿ ಕೊಡದೆ, ಯುವಕರನ್ನು, ಬಡವರನ್ನು ಸೋಮಾರಿಗಳನ್ನಾಗಿ ಮಾಡುವುದಿಲ್ಲ. ಕ್ರೀಡೆಗೆ ಪ್ರೋತ್ಸಾಹ, ಓದುವವರಿಗೆ ಸಹಾಯಧನ ಒದಗಿಸುವೆ. ಪ್ರತಿಯೊಬ್ಬರೂ ಚಟುವಟಿಕೆಯ ಜೀವನ ನಡೆಸುವಂತೆ ಮಾಡುವೆ. ಜನಪ್ರತಿನಿಧಿಗಳು ಕ್ಷೇತ್ರದಲ್ಲೇ ಇರುವಂತೆ ಕಡ್ಡಾಯ ಮಾಡುವೆ. ಟಿಎ,ಡಿಎ ಎಲ್ಲಾ ಬಂದ್ ಮಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವೆ.

– ಟಿ.ಎಂ.ಮಾನಪ್ಪ, ಗೋಪಾಳ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT