‘ಜಾಗವೊಂದರ ವ್ಯವಹಾರ ಮುಗಿಸಿ ಹಣ ಪಡೆದುಕೊಂಡು ಕಚೇರಿಯಿಂದ ಹೊರಗೆ ಬಂದಿದ್ದ ಜಯರಾಮ್, ಕಾರಿನಲ್ಲಿ ಮನೆಯತ್ತ ಹೊರಡಲು ಸಜ್ಜಾಗಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಕಾರಿನ ಚಕ್ರ ಪಂಕ್ಚರ್ ಆಗಿರುವುದಾಗಿ ಹೇಳಿದ್ದರು. ಕಾರಿನಿಂದ ಇಳಿದು ಚಕ್ರ ಗಮನಿಸಿದ್ದ ಜಯರಾಮ್, ಪಂಕ್ಚರ್ ತಿದ್ದಿಸಲು ಸಮೀಪದಲ್ಲೇ ಇದ್ದ ಅಂಗಡಿಗೆ ಹೋಗಿದ್ದರು. ಅದೇ ವೇಳೆ ಗಮನ ಬೇರೆಡೆ ಸೆಳೆದಿದ್ದ ಆರೋಪಿಗಳು, ಕಾರಿನಲ್ಲಿದ್ದ ಹಣ ಕದ್ದುಕೊಂಡು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.