‘ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ನಾಗೇಶ್, ತಮ್ಮ ಬೆಂಬಲಿಗರ ಜತೆಯಲ್ಲಿ ಶನಿವಾರ ಸಂಜೆ ಚಿಕ್ಕಭೈರತಿಗೆ ಹೋಗಿದ್ದರು. ಅಲ್ಲಿಯೇ ಎರಡು ಗುಂಪಿನ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದರು. ಅದೇ ವೇಳೆ ಎದುರಾಳಿ ಗುಂಪಿಯ ವ್ಯಕ್ತಿಗಳು, ನಾಗೇಶ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದರು.’