ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸರ್ಕಾರಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ 75 ಲಕ್ಷಕ್ಕೂ ಹೆಚ್ಚು ನೌಕರರು ಹೊಸ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಅವರ ಸಂಧ್ಯಾಕಾಲದ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಮೂರು ದಶಕ ದುಡಿದರೂ ಜೀವನ ಭದ್ರತೆ ಇಲ್ಲ. ಈ ಯೋಜನೆಕೇಂದ್ರ ಸರ್ಕಾರ ಪಿಎಫ್ಆರ್ಡಿಎ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ ದೇಶದ 3 ರಾಜ್ಯಗಳು ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸುವ ನಿರ್ಧಾರ ಕೈಗೊಂಡರೂ, ನಿರ್ಧಾರ ಜಾರಿಯಾಗಲು, ಅಲ್ಲಿನ ನೌಕರರಿಂದ ಸಂಗ್ರಹಿಸಿದ್ದ ಎನ್ಪಿಎಸ್ ವಂತಿಕೆ ಮರಳಿಸಲುಪಿಎಫ್ಆರ್ಡಿಎ ಕಾಯ್ದೆ ಅಡ್ಡಿಯಾಗಿದೆ ಎಂದು ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಹಳೇ ಪಿಂಚಣಿ ಮರುಸ್ಥಾಪನಾ
ಸಂಯುಕ್ತ ರಂಗದ ಅಧ್ಯಕ್ಷ ಬಿ.ಪಿ.ಸಿಂಗ್ ರಾವತ್, ಉಪಾಧ್ಯಕ್ಷ ವಿನೋದ್ ಕನೊಜಿಯಾ, ತೆಲಂಗಾಣ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಪತ್ಕುಮಾರ್ ಸ್ವಾಮಿ ದೂರಿದರು.