ಬೆಂಗಳೂರು: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಪಶ್ವಿಮ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
‘ಫೆಡ್ರಿಕ್ ಮೆಡಾರ್ಡೊ (32), ಪುನೀತ್ (32), ಆರ್.ಮಧು ಹಾಗೂ ವಿಜಯ್ಕುಮಾರ್ ಬಂಧಿತರು. ಕೆ.ಪಿ.ಅಗ್ರಹಾರ, ಚಂದ್ರಾ ಲೇಔಟ್ ಹಾಗೂ ಜ್ಞಾನಭಾರತಿ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
‘ಮಾಗಡಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಆರೋಪಿ ಫೆಡ್ರಿಕ್, ಚರಸ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈಬಗ್ಗೆ ಮಾಹಿತಿಪಡೆದು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. 665 ಗ್ರಾಂ ಚರಸ್ ಜಪ್ತಿ ಮಾಡಿದ್ದಾರೆ’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
‘ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಲ್ಲಾಳ್ ಉಪನಗರ ಕೆರೆ ಬಳಿ ಆರೋಪಿ ಪುನೀತ್, ಗಾಂಜಾ ಮಾರುತ್ತಿದ್ದರು. ದಾಳಿ ಮಾಡಿ, 11 ಕೆ.ಜಿ 710 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆರ್. ಮಧು ಹಾಗೂ ವಿಜಯ್ಕುಮಾರ್ನಿಂದ 395 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದರು.