ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‍ಇ ಪಠ್ಯಕ್ರಮ ಕಡಿತ: ಶಿಕ್ಷಣ ಉಳಿಸಿ ಸಮಿತಿ ಖಂಡನೆ

Last Updated 12 ಜುಲೈ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: 9ರಿಂದ 12ನೇ ತರಗತಿಗಳ ಪಠ್ಯಕ್ರಮದಿಂದ ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ ಮುಂತಾದ ಪ್ರಮುಖ ಅಧ್ಯಾಯಗಳನ್ನು ತೆಗೆದು ಹಾಕಿರುವ ಸಿಬಿಎಸ್‍ಇ ಮಂಡಳಿಯ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಖಂಡಿಸಿದೆ.

’ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಇದು ಶಿಕ್ಷಣದ ಮೇಲೆ ನಿರಂಕುಶ ಹಾಗೂ ಅಪ್ರಜಾತಾಂತ್ರಿಕ ದಾಳಿ. ಪಠ್ಯಕ್ರಮ ಕಡಿಮೆ ಮಾಡುವ ನೆಪದಲ್ಲಿ ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ, ಪೌರತ್ವ, ರಾಷ್ಟ್ರೀಯವಾದದಂತಹ ಪ್ರಮುಖ ವಿಷಯಗಳನ್ನು ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಪಠ್ಯಕ್ರಮದಿಂದ ತೆಗೆದು ಹಾಕಿರುವುದು ಖಂಡನಾರ್ಹ. ಇದು ಬಿಜೆಪಿ, ಆರ್‌ಎಸ್‌ಎಸ್‌ಪ್ರತಿಪಾದಿಸುವ ರಾಷ್ಟ್ರತ್ವದ ಪರಿಕಲ್ಪನೆಗೆ ಪೂರಕವಾದ ನಿಲುವನ್ನು ವ್ಯಕ್ತಪಡಿಸುವಂತಿದೆ‘ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT