ಸಂಘಗಳ ನಡುವೆ ಒಡಕು ಬೇಡ: ಸಭೆಯಲ್ಲಿದ್ದ ನಿವೃತ್ತ ಎಸಿಪಿ ಅಬ್ದುಲ್ ಅಜೀಂ, ‘ಬೆಂಗಳೂರಿನಲ್ಲೇ ಎರಡು ಸಂಘಗಳಿದ್ದು, ಈ ರೀತಿಯ ಒಡಕು ಸರಿಯಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು, ಒಂದೇ ಸಂಘದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಅವರು ಹೇಳಿದರು.ನಿವೃತ್ತ ಡಿಜಿಪಿ ಓಂ ಪ್ರಕಾಶ್, ‘ಸಂಘಕ್ಕೆ ಜಾಗ ಹಾಗೂ ಕಟ್ಟಡ ಒದಗಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.80 ವರ್ಷ ದಾಟಿದ ನಿವೃತ್ತ ಪೊಲೀಸರನ್ನು ಹಾಗೂ ಎಸ್ಸೆಸ್ಸೆಲ್ಸಿ– ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನಿವೃತ್ತ ಪೊಲೀಸರ ಮಕ್ಕಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.