ಫೆ.17ರಂದು ಸಂಜೆ 5.30 ಗಂಟೆ ಸುಮಾರಿಗೆ ಪ್ರತಿಭಟನೆ ಉದ್ದೇಶಿಸಿ ಸ್ವಾಮೀಜಿ ಮಾತನಾಡುತ್ತಿದ್ದರು. ಪೆಟ್ರೋಲ್ ಬಾಟಲಿ ಸಮೇತ ಹಾಜರಿದ್ದ ಶಿವ ಬಂಡಿ, ‘ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ನ್ಯಾಯ ಬೇಕು. ಸಮಾಜಕ್ಕೋಸ್ಕರ ಪ್ರಾಣ ನೀಡುತ್ತೇನೆ’ ಎಂದು ಕೂಗಾಡಿದ್ದರು. ನಂತರ, ಏಕಾಏಕಿ ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು. ರಕ್ಷಣೆಗೆ ಹೋಗಿದ್ದ ಪೊಲೀಸರು ಶಿವ ಬಂಡಿಯನ್ನು ವಶಕ್ಕೆ ಪಡೆದರು.