ಬೆಂಗಳೂರು: ಅಧಿವೇಶನ ಆರಂಭವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯುಳ್ಳ ಭಿತ್ರಿಪತ್ರಗಳನ್ನು ನಗರದ ಹಲವೆಡೆ ಗೋಡೆಗಳ ಮೇಲೆ ಅಂಟಿಸಲಾಗಿದೆ.
ಮೇಖ್ರಿ ವೃತ್ತ, ಅರಮನೆ ರಸ್ತೆ, ಶಂಕರ ಮಠ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಸೋಮವಾರ ಭಿತ್ತಿಪತ್ರಗಳು ಕಂಡವು. ಆದರೆ, ಈ ಭಿತ್ತಿಪತ್ರಗಳನ್ನು ಅಂಟಿಸಿದ್ದು ಯಾರು ಎಂಬುದು ಗೊತ್ತಾಗಿಲ್ಲ.
₹2000 ಕೋಟಿ ಲೂಟಿ ಮಾಡಿರುವ ಸೋಂಕಿತ ಸರ್ಕಾರ ಹಾಗೂ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಅಧಿಕಾರ ಬಂದ ಸೋಂಕಿತ ಸರ್ಕಾರ ಸೇರಿದಂತೆ ಹಲವು ಘೋಷಣೆಗಳು ಭಿತ್ತಿಪತ್ರದಲ್ಲಿ ಇವೆ.