ದುರ್ಯೋಧನ ಪ್ರೇಕ್ಷಕರ ಸಮೂಹದೊಳಗೆ ನುಗ್ಗುವುದು, ಗಾಂಧಾರಿ ಕನ್ನಡಿ ಮುಂದೆ ಮಾತನಾಡುವುದು ಸೇರಿದಂತೆ ನಾಟಕದ ಕೊನೆಯ ದೃಶ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದವು. ನಾಟಕ ಮುಗಿಯುತ್ತಿದ್ದಂತೆ ನಟ, ನಟಿಯರು ಎಲ್ಲರಿಗೂ ಕೈ ಮುಗಿಯುತ್ತ ಕಲಾಮಂದಿರದ ಮುಖ್ಯದ್ವಾರದಿಂದ ನಿರ್ಗಮಿಸುತ್ತಿದ್ದಂತೆ, ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದರು.