ಡಿಸೆಂಬರ್ 27ರಂದು ಪಂಚಾಯ್ತಿ ಕಚೇರಿಗೆ ಹೋಗಿ ಪಿಡಿಒ ಅವರನ್ನು ವಿಚಾರಿಸಿದಾಗ ₹ 8,000 ಲಂಚ ಕೊಡುವಂತೆ ಕೇಳಿದರು. ‘ನಾನು ವಿದ್ಯಾರ್ಥಿ, ತಂದೆಗೆ ಸಂಬಳ ಕಡಿಮೆ. ಇಷ್ಟೊಂದು ಹಣ ಹೊಂದಿಸುವುದು ಕಷ್ಟ ಆಗುತ್ತದೆ’ ಎಂದು ವಿದ್ಯಾರ್ಥಿ ಹೇಳಿದರೂ ನರ್ಮದಾ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.