<p><strong>ಬೆಂಗಳೂರು</strong>: ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ–4ರ ಪೀಣ್ಯ ಮೇಲ್ಸೇತುವೆ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.</p><p>ಕೇಬಲ್ ಬದಲಾವಣೆ ಹಾಗೂ ಕೇಬಲ್ಗಳ ಸಾಮರ್ಥ್ಯ ಪರೀಕ್ಷೆಗೆಂದು ನಾಲ್ಕು ದಿನ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ ಕೆನ್ನಮೆಟಲ್ ವಿಡಿಯಾದ ಅಪ್ಪರ್ ರ್ಯಾಂಪ್ನಿಂದ ಎಸ್ಆರ್ಎಸ್ ಡೌನ್ ರ್ಯಾಂಪ್ ವರೆಗೆ ಎರಡೂ ಕಡೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.</p><p>ವಾಹನ ಸಂಚಾರ ಬಂದ್ ಆಗಿದ್ದರ ಪರಿಣಾಮ ಕಳೆದ ನಾಲ್ಕು ದಿನಗಳಿಂದ ಮೇಲ್ಸೇತುವೆಯ ಕೆಳರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಂಬುಲೆನ್ಸ್ಗಳೂ ದಟ್ಟಣೆಯಲ್ಲಿ ಸಿಲುಕಿ ರೋಗಿಗಳು ಪರದಾಡಿದ್ದರು. ಪರ್ಯಾಯ ಮಾರ್ಗದ ಒಳರಸ್ತೆಯಲ್ಲೂ ದಟ್ಟಣೆ ಉಂಟಾಗಿತ್ತು. </p><p>ಮೇಲ್ಸೇತುವೆಯ 1,422 ‘ಪ್ರಿಸ್ಟ್ರೆಸ್ಸಿಂಗ್ ಕೇಬಲ್’ ಬದಲಿಸಲಾಗಿತ್ತು. ₹32 ಕೋಟಿ ವೆಚ್ಚದಲ್ಲಿ ಹೊಸ ಕೇಬಲ್ಗಳನ್ನು ಅಳವಡಿಸಿದ್ದ ಬಳಿಕ ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ಭಾರ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ ಮೇಲ್ಸೇತುವೆ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಗಿದೆ. ತಲಾ 32 ಟನ್ ಭಾರ ಹೊತ್ತ ಎಂಟು ಟ್ರಕ್ಗಳನ್ನು ಆಯ್ಕೆ ಮಾಡಲಾದ ನಾಲ್ಕು ನಿರ್ದಿಷ್ಟ ಸ್ಪ್ಯಾನ್ಗಳ ಮೇಲೆ ನಿಲ್ಲಿಸಿ, ಪರೀಕ್ಷೆ ನಡೆಸಲಾಗಿದೆ. ಸೇತುವೆಯ ರಚನಾತ್ಮಕ ಬದಲಾವಣೆಗಳನ್ನು ಗೇಜ್ಗಳ ಮೂಲಕ ಅಳೆಯಲಾಗಿದೆ. ನಾಲ್ಕು ದಿನ ಪರೀಕ್ಷೆ ನಡೆಸಲಾಗಿದ್ದು, ಸೇತುವೆ ಸುಭದ್ರ ಆಗಿರುವುದು ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ–4ರ ಪೀಣ್ಯ ಮೇಲ್ಸೇತುವೆ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.</p><p>ಕೇಬಲ್ ಬದಲಾವಣೆ ಹಾಗೂ ಕೇಬಲ್ಗಳ ಸಾಮರ್ಥ್ಯ ಪರೀಕ್ಷೆಗೆಂದು ನಾಲ್ಕು ದಿನ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ ಕೆನ್ನಮೆಟಲ್ ವಿಡಿಯಾದ ಅಪ್ಪರ್ ರ್ಯಾಂಪ್ನಿಂದ ಎಸ್ಆರ್ಎಸ್ ಡೌನ್ ರ್ಯಾಂಪ್ ವರೆಗೆ ಎರಡೂ ಕಡೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.</p><p>ವಾಹನ ಸಂಚಾರ ಬಂದ್ ಆಗಿದ್ದರ ಪರಿಣಾಮ ಕಳೆದ ನಾಲ್ಕು ದಿನಗಳಿಂದ ಮೇಲ್ಸೇತುವೆಯ ಕೆಳರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಂಬುಲೆನ್ಸ್ಗಳೂ ದಟ್ಟಣೆಯಲ್ಲಿ ಸಿಲುಕಿ ರೋಗಿಗಳು ಪರದಾಡಿದ್ದರು. ಪರ್ಯಾಯ ಮಾರ್ಗದ ಒಳರಸ್ತೆಯಲ್ಲೂ ದಟ್ಟಣೆ ಉಂಟಾಗಿತ್ತು. </p><p>ಮೇಲ್ಸೇತುವೆಯ 1,422 ‘ಪ್ರಿಸ್ಟ್ರೆಸ್ಸಿಂಗ್ ಕೇಬಲ್’ ಬದಲಿಸಲಾಗಿತ್ತು. ₹32 ಕೋಟಿ ವೆಚ್ಚದಲ್ಲಿ ಹೊಸ ಕೇಬಲ್ಗಳನ್ನು ಅಳವಡಿಸಿದ್ದ ಬಳಿಕ ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ಭಾರ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ ಮೇಲ್ಸೇತುವೆ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಗಿದೆ. ತಲಾ 32 ಟನ್ ಭಾರ ಹೊತ್ತ ಎಂಟು ಟ್ರಕ್ಗಳನ್ನು ಆಯ್ಕೆ ಮಾಡಲಾದ ನಾಲ್ಕು ನಿರ್ದಿಷ್ಟ ಸ್ಪ್ಯಾನ್ಗಳ ಮೇಲೆ ನಿಲ್ಲಿಸಿ, ಪರೀಕ್ಷೆ ನಡೆಸಲಾಗಿದೆ. ಸೇತುವೆಯ ರಚನಾತ್ಮಕ ಬದಲಾವಣೆಗಳನ್ನು ಗೇಜ್ಗಳ ಮೂಲಕ ಅಳೆಯಲಾಗಿದೆ. ನಾಲ್ಕು ದಿನ ಪರೀಕ್ಷೆ ನಡೆಸಲಾಗಿದ್ದು, ಸೇತುವೆ ಸುಭದ್ರ ಆಗಿರುವುದು ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>