ಚಿಂತಕಿ ಬಿ.ಟಿ. ಲಲಿತಾ ನಾಯಕ್,‘ಎಲ್ಲರಿಗೂ ದೇವಾಲಯಗಳಿಗೆ ಪ್ರವೇಶ ನೀಡಬೇಕು, ಬಾಲ್ಯವಿವಾಹ ರದ್ದು ಮಾಡಬೇಕು, ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬಂಡಾಯವೆದ್ದು ಹೋರಾಡಿದವರು ಪೆರಿಯಾರ್ ರಾಮಸ್ವಾಮಿ. ಅವರು ಏಕಾಏಕಿ ವಿಚಾರವಾದಿಯಾಗಲಿಲ್ಲ. ಅವರಲ್ಲಿದ್ದ ಆಕ್ರೋಶವೇ ಅವರನ್ನು ವಿಚಾರವಂತನನ್ನಾಗಿ ಮಾಡಿತು’ ಎಂದರು.