' ಸರ್ಕಾರದ ದುರುದ್ದೇಶದಿಂದ ಕೂಡಿರುವ ಕೃಷಿ ಮಸೂದೆಗಳು, ದೇಶದ ಜೀವಾಳವಾಗಿರುವ ರೈತರ ಬೆನ್ನೆಲುಬನ್ನೇ ಮುರಿದು ಹಾಕಲಿವೆ. ಈ ಅಪಾಯಕಾರಿ ಕಾನೂನುಗಳ ಬಗ್ಗೆ ಜನರು ಜಾಗೃತರಾಗಬೇಕು. ಜನವಿರೋಧಿ ಕ್ರಮಗಳ ವಿರುದ್ಧ ರೈತಪರ ಹಾಗೂ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಸಂಘಟನೆ ಬೆಂಬಲ ನೀಡಲಿದ್ದು, ಸರ್ಕಾರದ ಧೋರಣೆಗಳ ವಿರುದ್ಧ ದನಿ ಎತ್ತಲಿದೆ' ಎಂದು ತಿಳಿಸಿದ್ದಾರೆ.