<p><strong>ಬೆಂಗಳೂರು</strong>: ‘ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ. ಇದರಿಂದಾಗಿಯೇ ರಾಜಕೀಯವಾಗಿ ಬೆಳೆದು ಸ್ಪೀಕರ್ ಹುದ್ದೆಯನ್ನು ಅಲಂಕರಿಸುವಂತಾಗಿದೆ’ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.</p>.<p>ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶುಕ್ರವಾರ ಹಮ್ಮಿಕೊಂಡಿದ್ದ`ಗೌರವ ಡಾಕ್ಟರೇಟ್ ಪುರಸ್ಕೃತರಾದ ಪಿ.ಜಿ.ಆರ್. ಸಿಂಧ್ಯ ಅಭಿನಂದನಾ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘1983ರಲ್ಲಿ ಸಿಂಧ್ಯ ಅವರು ಸಚಿವರಾಗಿದ್ದರು. ಆಗ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು. ಪಕ್ಕದಲ್ಲಿಯೇ ಸ್ಕೌಟ್ಸ್ ಶಿಬಿರ ಆಯೋಜನೆಗೊಂಡಿತ್ತು. ಅಂದು ಸಿಂಧ್ಯ ಅವರನ್ನು ನೋಡಿದ್ದೆ. ಸ್ಕೌಟ್ಸ್ ಟೆಂಟ್ನಲ್ಲಿ ಇದ್ದ ಖಾದರ್ ಇಂದು ಸ್ಪೀಕರ್ ಹುದ್ದೆ ಏರಲು ಅಂದಿನ ಶಿಸ್ತು ಪ್ರೇರಣೆಯಾಗಿದೆ’ ಎಂದು ತಿಳಿಸಿದರು</p>.<p>‘ಸಿಂಧ್ಯ ಅವರು ಏಕಾಏಕಿ ನಾಯಕರಾದವರಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಅವರಲ್ಲಿ ನಾಯಕತ್ವದ ಗುಣಗಳು ಇದ್ದವು. ವಿಧಾನ ಸಭೆಯಲ್ಲೂ ಅವರ ಭಾಷಣಗಳನ್ನು ಕೇಳಿದ್ದೇನೆ. ತಾವೊಬ್ಬರೇ ನಾಯಕರಾಗಿ ಉಳಿಯದೇ ಹಲವರನ್ನು ಬೆಳೆಸಿದರು. ಇದರಿಂದಲೇ ಅವರು ಈಗಲೂ ಜನರ ಅಭಿಮಾನದ ನಡುವೆ ಉಳಿದಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ‘ಗುಲಬರ್ಗಾ ವಿವಿ ನೀಡಿದ ಡಾಕ್ಟರೇಟ್ನಿಂದ ಸಿಂಧ್ಯ ಅವರು ದೊಡ್ಡವರಾಗಿಲ್ಲ. ಸಿಂಧ್ಯ ಅವರಿಂದ ಆ ಪ್ರಶಸ್ತಿಯ ಮೌಲ್ಯ, ಗೌರವ ಹೆಚ್ಚಾಗಿದೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಪ್ರೇರಣದಾಯಕ. ಬಹುತೇಕರಿಗೆ ಅವರು ಈಗಲೂ ಮಾದರಿ’ ಎಂದರು.</p>.<p>ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ತುರ್ತು ಪರಿಸ್ಥಿತಿ ಕಾಲದಿಂದಲೂ ಸಿಂಧ್ಯ ಅವರನ್ನು ನೋಡಿದ್ದೇನೆ. ಅವರೊಂದಿಗಿನ ಆ ದಿನಗಳನ್ನು ಮರೆಯಲಾಗದು’ ಎಂದು ತಿಳಿಸಿದರು.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ವಿದ್ವಾಂಸ ಗೊ.ರು.ಚನ್ನಬಸಪ್ಪ ಉಪಸ್ಥಿತರಿದ್ದರು.</p>.<p>ಸಿಂಧ್ಯ ಜೀವನಗಾಥೆ</p><p>ಪುಸ್ತಕ ಗೌರವ ಸ್ವೀಕರಿಸಿ ಮಾತನಾಡಿದ ಪಿ.ಜಿ.ಆರ್.ಸಿಂಧ್ಯ ‘ವಿಧಾನಸೌಧದ ಮೂರನೇ ಮಹಡಿ ಹತ್ತುವುದು ಸುಲಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ನನ್ನ ಜೀವನದ ಐದಾರು ಮಹತ್ತರವಾದ ಘಟನೆಗಳನ್ನು ಒಳಗೊಂಡ'ತೆ ಇಲ್ಲಿಯವರೆಗಿನ ಜೀವನ ಪಯಣದ ಪುಸ್ತಕ ಬರೆಯುತ್ತಿದ್ದೇನೆ. ಸೆಪ್ಟೆಂಬರ್ ವೇಳೆಗೆ ಹೊರಬರಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ. ಇದರಿಂದಾಗಿಯೇ ರಾಜಕೀಯವಾಗಿ ಬೆಳೆದು ಸ್ಪೀಕರ್ ಹುದ್ದೆಯನ್ನು ಅಲಂಕರಿಸುವಂತಾಗಿದೆ’ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.</p>.<p>ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶುಕ್ರವಾರ ಹಮ್ಮಿಕೊಂಡಿದ್ದ`ಗೌರವ ಡಾಕ್ಟರೇಟ್ ಪುರಸ್ಕೃತರಾದ ಪಿ.ಜಿ.ಆರ್. ಸಿಂಧ್ಯ ಅಭಿನಂದನಾ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘1983ರಲ್ಲಿ ಸಿಂಧ್ಯ ಅವರು ಸಚಿವರಾಗಿದ್ದರು. ಆಗ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು. ಪಕ್ಕದಲ್ಲಿಯೇ ಸ್ಕೌಟ್ಸ್ ಶಿಬಿರ ಆಯೋಜನೆಗೊಂಡಿತ್ತು. ಅಂದು ಸಿಂಧ್ಯ ಅವರನ್ನು ನೋಡಿದ್ದೆ. ಸ್ಕೌಟ್ಸ್ ಟೆಂಟ್ನಲ್ಲಿ ಇದ್ದ ಖಾದರ್ ಇಂದು ಸ್ಪೀಕರ್ ಹುದ್ದೆ ಏರಲು ಅಂದಿನ ಶಿಸ್ತು ಪ್ರೇರಣೆಯಾಗಿದೆ’ ಎಂದು ತಿಳಿಸಿದರು</p>.<p>‘ಸಿಂಧ್ಯ ಅವರು ಏಕಾಏಕಿ ನಾಯಕರಾದವರಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಅವರಲ್ಲಿ ನಾಯಕತ್ವದ ಗುಣಗಳು ಇದ್ದವು. ವಿಧಾನ ಸಭೆಯಲ್ಲೂ ಅವರ ಭಾಷಣಗಳನ್ನು ಕೇಳಿದ್ದೇನೆ. ತಾವೊಬ್ಬರೇ ನಾಯಕರಾಗಿ ಉಳಿಯದೇ ಹಲವರನ್ನು ಬೆಳೆಸಿದರು. ಇದರಿಂದಲೇ ಅವರು ಈಗಲೂ ಜನರ ಅಭಿಮಾನದ ನಡುವೆ ಉಳಿದಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ‘ಗುಲಬರ್ಗಾ ವಿವಿ ನೀಡಿದ ಡಾಕ್ಟರೇಟ್ನಿಂದ ಸಿಂಧ್ಯ ಅವರು ದೊಡ್ಡವರಾಗಿಲ್ಲ. ಸಿಂಧ್ಯ ಅವರಿಂದ ಆ ಪ್ರಶಸ್ತಿಯ ಮೌಲ್ಯ, ಗೌರವ ಹೆಚ್ಚಾಗಿದೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಪ್ರೇರಣದಾಯಕ. ಬಹುತೇಕರಿಗೆ ಅವರು ಈಗಲೂ ಮಾದರಿ’ ಎಂದರು.</p>.<p>ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ತುರ್ತು ಪರಿಸ್ಥಿತಿ ಕಾಲದಿಂದಲೂ ಸಿಂಧ್ಯ ಅವರನ್ನು ನೋಡಿದ್ದೇನೆ. ಅವರೊಂದಿಗಿನ ಆ ದಿನಗಳನ್ನು ಮರೆಯಲಾಗದು’ ಎಂದು ತಿಳಿಸಿದರು.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ವಿದ್ವಾಂಸ ಗೊ.ರು.ಚನ್ನಬಸಪ್ಪ ಉಪಸ್ಥಿತರಿದ್ದರು.</p>.<p>ಸಿಂಧ್ಯ ಜೀವನಗಾಥೆ</p><p>ಪುಸ್ತಕ ಗೌರವ ಸ್ವೀಕರಿಸಿ ಮಾತನಾಡಿದ ಪಿ.ಜಿ.ಆರ್.ಸಿಂಧ್ಯ ‘ವಿಧಾನಸೌಧದ ಮೂರನೇ ಮಹಡಿ ಹತ್ತುವುದು ಸುಲಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ನನ್ನ ಜೀವನದ ಐದಾರು ಮಹತ್ತರವಾದ ಘಟನೆಗಳನ್ನು ಒಳಗೊಂಡ'ತೆ ಇಲ್ಲಿಯವರೆಗಿನ ಜೀವನ ಪಯಣದ ಪುಸ್ತಕ ಬರೆಯುತ್ತಿದ್ದೇನೆ. ಸೆಪ್ಟೆಂಬರ್ ವೇಳೆಗೆ ಹೊರಬರಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>