ಇಲ್ಲಿನ ಮರಾಠಿಗರು ಕನ್ನಡಿಗರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ‘ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡಿಗರು. ಉತ್ತರ ಕರ್ನಾಟಕದಅನೇಕ ಭಾಗ, ಮೈಸೂರು ಸೇರಿದಂತೆ ಹಲವೆಡೆ ಮರಾಠಿಗರು ಇದ್ದಾರೆ. ಅವರ ಆಡುಭಾಷೆ ಮರಾಠಿ ಆದರೂ ಮೂಲ ಕರ್ನಾಟಕ. ಈ ನಾಡನ್ನು ಕಟ್ಟಲು ಎಲ್ಲ ಸಮಾಜಗಳೂ ಕೊಡುಗೆ ನೀಡಿವೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಮಂಡಳಿಗಳಿವೆ. ಅದೇ ರೀತಿ, ಇಲ್ಲಿನ ಮರಾಠಿಗರಿಗೂ ಸರ್ಕಾರವು ಮಂಡಳಿ ಸ್ಥಾಪಿಸಿದೆ. ಶಿವಾಜಿ ಮಹಾರಾಜರ ವಿಚಾರಧಾರೆ ಅನುಸಾರ ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿದೆ. ಅವರ ವಿಚಾರಧಾರೆಯನ್ನು ಇನ್ನಷ್ಟು ಪ್ರಚಾರ ಮಾಡಬೇಕಿದೆ’ಎಂದು ತಿಳಿಸಿದರು.