<p><strong>ಬೆಂಗಳೂರು</strong>: ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್, ಬೈಸೇಲ್ ಇನ್ಟ್ರಾಕ್ಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಯೋಗದಲ್ಲಿ ಜೂನ್ 27ರಿಂದ 29ರವರೆಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಫೋಟೊ ಟುಡೇ’ ವಸ್ತು ಪ್ರದರ್ಶನ ನಡೆಯಲಿದೆ.</p><p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬೆಂಜಿಮಿನ್ ಭಾಸ್ಕರ್ ಮತ್ತು ಕಾರ್ಯದರ್ಶಿ ಜಗದೀಶ್ ಎಲ್., ‘ಛಾಯಾಗ್ರಾಹಕರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ’ ಎಂದು ಮಾಹಿತಿ ನೀಡಿದರು. </p><p>‘ಜೂನ್ 27ರಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಮೇಳವನ್ನು ಉದ್ಘಾಟಿಸಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.</p><p><strong>ರಿಪಲ್ಸ್ ಆನ್ ಆರ್ಟ್ ಈವೆಂಟ್ ಜೂನ್ 28ಕ್ಕೆ</strong></p><p><strong>ಬೆಂಗಳೂರು</strong>: ಒರಾಯನ್ ಮಾಲ್ ಹಾಗೂ ಆರ್ಟ್ ಮ್ಯಾಟರ್ಸ್ ಸಹಯೋಗದಲ್ಲಿ ಜೂನ್ 28ರಂದು ಒರಾಯನ್ ಮಾಲ್ನಲ್ಲಿ ‘ರಿಪಲ್ಸ್ ಆನ್ ಆರ್ಟ್ ಈವೆಂಟ್ ಫಾರ್ ಸಸ್ಟೈನಬಲ್ ಬೆಂಗಳೂರು’ ಹಮ್ಮಿಕೊಳ್ಳಲಾಗಿದೆ. </p><p>‘ಹಾವುಗಳು ಮತ್ತು ಅವುಗಳ ಪರಿಸರ ವ್ಯವಸ್ಥೆ’ ಶೀರ್ಷಿಕೆ ಅಡಿ ನಡೆಯಲಿದೆ. ವೃತ್ತಿಪರ ಕಲಾವಿದರಿಗೆ ಲೈವ್ ಪೇಂಟಿಂಗ್ ಸ್ಪರ್ಧೆ, 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪರಿಸರದ ಕುರಿತು ಗ್ರೀನ್ ಕ್ವಿಜ್ ಸ್ಪರ್ಧೆ, ಮಕ್ಕಳಿಗಾಗಿ ರ್ಯಾಪಿಡ್ ಆರ್ಟ್ ಸ್ಪರ್ಧೆ ಆಯೋಜಿಸಿದ್ದು. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ:99164 36399, 70195 76419.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್, ಬೈಸೇಲ್ ಇನ್ಟ್ರಾಕ್ಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಯೋಗದಲ್ಲಿ ಜೂನ್ 27ರಿಂದ 29ರವರೆಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಫೋಟೊ ಟುಡೇ’ ವಸ್ತು ಪ್ರದರ್ಶನ ನಡೆಯಲಿದೆ.</p><p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬೆಂಜಿಮಿನ್ ಭಾಸ್ಕರ್ ಮತ್ತು ಕಾರ್ಯದರ್ಶಿ ಜಗದೀಶ್ ಎಲ್., ‘ಛಾಯಾಗ್ರಾಹಕರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ’ ಎಂದು ಮಾಹಿತಿ ನೀಡಿದರು. </p><p>‘ಜೂನ್ 27ರಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಮೇಳವನ್ನು ಉದ್ಘಾಟಿಸಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.</p><p><strong>ರಿಪಲ್ಸ್ ಆನ್ ಆರ್ಟ್ ಈವೆಂಟ್ ಜೂನ್ 28ಕ್ಕೆ</strong></p><p><strong>ಬೆಂಗಳೂರು</strong>: ಒರಾಯನ್ ಮಾಲ್ ಹಾಗೂ ಆರ್ಟ್ ಮ್ಯಾಟರ್ಸ್ ಸಹಯೋಗದಲ್ಲಿ ಜೂನ್ 28ರಂದು ಒರಾಯನ್ ಮಾಲ್ನಲ್ಲಿ ‘ರಿಪಲ್ಸ್ ಆನ್ ಆರ್ಟ್ ಈವೆಂಟ್ ಫಾರ್ ಸಸ್ಟೈನಬಲ್ ಬೆಂಗಳೂರು’ ಹಮ್ಮಿಕೊಳ್ಳಲಾಗಿದೆ. </p><p>‘ಹಾವುಗಳು ಮತ್ತು ಅವುಗಳ ಪರಿಸರ ವ್ಯವಸ್ಥೆ’ ಶೀರ್ಷಿಕೆ ಅಡಿ ನಡೆಯಲಿದೆ. ವೃತ್ತಿಪರ ಕಲಾವಿದರಿಗೆ ಲೈವ್ ಪೇಂಟಿಂಗ್ ಸ್ಪರ್ಧೆ, 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪರಿಸರದ ಕುರಿತು ಗ್ರೀನ್ ಕ್ವಿಜ್ ಸ್ಪರ್ಧೆ, ಮಕ್ಕಳಿಗಾಗಿ ರ್ಯಾಪಿಡ್ ಆರ್ಟ್ ಸ್ಪರ್ಧೆ ಆಯೋಜಿಸಿದ್ದು. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ:99164 36399, 70195 76419.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>