ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಶಾಲೆಗೆ ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿಗಳಿಗಾಗಿ ಘೋಷವಾಕ್ಯ ರಚನೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಚಿತ್ರಕಲೆಯಲ್ಲಿ ವಿಜೇತರಾದ ಶ್ವೇತಾ (ಪ್ರಥಮ),ಅನುಷಾ (ದ್ವಿತೀಯ), ಸಲ್ಮಾ ಎಂ.ಬೆಳವಗಿ (ತೃತೀಯ) ಹಾಗೂ ಘೋಷವಾಕ್ಯ ರಚನೆ ಸ್ಪರ್ಧೆಯಲ್ಲಿ ಅಶೋಕ್ (ಪ್ರಥಮ), ವೀರೇಶ್ (ದ್ವಿತೀಯ), ಕೆ.ಲಕ್ಷ್ಮಿ (ತೃತೀಯ)ಗೆ ಬಹುಮಾನ ವಿತರಿಸಲಾಯಿತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಯೋಗ ಶಿಕ್ಷಕ ಮಂಜುನಾಥ್, ಶಾಲಾ ಶಿಕ್ಷಕರು ಭಾಗವಹಿಸಿದ್ದರು.