ಕಲ್ಯಾಣ ಮಂಟಪದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯ ಪ್ರಮಾಣದ ಸ್ಟೀಲ್, ಸಿರಾಮಿಕ್ ಅಥವಾ ಮೆಲಮೈನ್ನಿಂದ ತಯಾರಿಸಿದ ಊಟದ ತಟ್ಟೆ, ಲೋಟ, ಚಮಚಗಳನ್ನು ಹೊಂದಿರಬೇಕು. ಕಡ್ಡಾಯವಾಗಿ ನೀರು ಶುದ್ಧೀಕರಣ ಘಟಕವನ್ನು ಹೊಂದಿರಬೇಕು. ಅದರ ನೀರನ್ನೇ ಕುಡಿಯಲು ಕೊಡಬೇಕು. ಇದರಿಂದಾಗಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕೊಡುವುದನ್ನು ತಪ್ಪಿಸಬಹುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.