ಕವಿ ಸಿದ್ಧಲಿಂಗಯ್ಯ, ‘ವೈಚಾರಿಕತೆಯನ್ನು ಬೆಳೆಸುವ ಸಲುವಾಗಿಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಿಎಸ್ಸೆಸ್ ಕನ್ನಡ ಅಧ್ಯಯನ ವಿಭಾಗ ಪ್ರಾರಂಭಿಸಿದ್ದರು. ಅವರು ನನಗೆಗುರುಗಳು ಮಾತ್ರವಾಗಿರದೇ ಉದ್ಯೋಗ ನೀಡಿದ ಅನ್ನದಾತರೂ ಆಗಿದ್ದಾರೆ. ಓದಿನ ಬಳಿಕ ಭಾಷಣ ಮಾಡಿಕೊಂಡಿದ್ದ ನನ್ನನ್ನು ಕರೆಸಿ, ನನ್ನಿಂದಲೇ ಅರ್ಜಿ ಬರೆಯಿಸಿ ಕೆಲಸ ಕೊಡಿಸಿದರು. ಅವರ ಒಡನಾಟ ಪಡೆದ ನಾವೇ ಭಾಗ್ಯಶಾಲಿ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.