‘ಐಒಸಿಗೆ ಹಂಚಿಕೆಯಾಗಿದ್ದ ಜಮೀನನ್ನು ಖಾಸಗಿಯವರು ಕಬಳಿಸಿದ್ದಾರೆ. ಅವರಿಗೆ ಪೊಲೀಸರು ನೆರವು ನೀಡುತ್ತಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ, ಎಸಿಪಿ ಪವನ್, ಡಿಸಿಪಿ ಶ್ರೀನಾಥ್ ಜೋಶಿ ಭೂಗಳ್ಳರ ಜತೆ ನಂಟು ಹೊಂದಿದ್ದಾರೆ. ಇಂತಹ ಹತ್ತಾರು ಪ್ರಕರಣಗಳಲ್ಲಿ ಭೂಗಳ್ಳರಿಗೆ ಬೆಂಬಲ ನೀಡಿದ್ದಾರೆ. ಬಿಡಿಎ ಆಸ್ತಿಗಳು, ಸಾರ್ವಜನಿಕರ ಖಾಸಗಿ ನಿವೇಶನಗಳನ್ನು ಕಬಳಿಸಲು ನೆರವಾಗುತ್ತಿದ್ದಾರೆ’ ಎಂದು ಆರೋಪಿಸಿದರು.