‘ರವಿ ಎಂಬುವರು ಮಗಳ ಶಾಲಾ ಶುಲ್ಕ ಪಾವತಿಸಲು ₹45 ಸಾವಿರ ಮೊತ್ತ ಸಾಲ ಪಡೆದಿದ್ದರು. ಅದನ್ನು ಪರ್ಸ್ನಲ್ಲಿ ಇಟ್ಟುಕೊಂಡು ಬನಶಂಕರಿ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಅದು ಬಿದ್ದು ಹೋಗಿತ್ತು. ಗಸ್ತಿನಲ್ಲಿದ್ದ ಕಾನ್ಸ್ಟೆಬಲ್ಗಳಾದ ಮಾದಪ್ಪ ಹಾಗೂ ಯಲ್ಲಾಲಿಂಗ ಅವರಿಗೆ ಪರ್ಸ್ ಸಿಕ್ಕಿತ್ತು. ಅದರಲ್ಲಿದ್ದ ಗುರುತಿನ ಚೀಟಿಯ ಆಧಾರದಲ್ಲಿ ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಹಣದ ಸಮೇತ ಪರ್ಸ್ ಹಿಂತಿರುಗಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.