ಅಪಘಾತದ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಯೊಬ್ಬರು, ‘ಎಂ.ಜಿ. ರಸ್ತೆ ಟ್ರಿನಿಟಿ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಅತೀ ವೇಗವಾಗಿ ಜೀಪು ಚಲಾಯಿಸಿಕೊಂಡು ಬಂದಿದ್ದ ಶ್ರೀಧರ್, ಎದುರಿಗಿದ್ದ ಕ್ಯಾಬ್ಗೆ ಡಿಕ್ಕಿ ಹೊಡೆಸಿದರು. ಅದರ ರಭಸಕ್ಕೆ ಕ್ಯಾಬ್ ಪಾದಚಾರಿ ಮಾರ್ಗಕ್ಕೆ ಹೋಗಿ ಕಂಬಕ್ಕೆ ಗುದ್ದಿತು. ಪೊಲೀಸ್ ಜೀಪು ರಸ್ತೆಯಲ್ಲೇ ಉರುಳಿಬಿತ್ತು’ ಎಂದರು.