‘ಅಂತರ ಜಿಲ್ಲಾ ವರ್ಗಾವಣೆ ಪದ್ಧತಿ ರದ್ದು ಮಾಡಿದ್ದು, ಪೊಲೀಸರಿಗೆ ತೊಂದರೆಯಾಗಿದೆ. ನಮ್ಮದು ಕಚೇರಿಯಲ್ಲಿ ಕುಳಿತು ಮಾಡುವ ಕೆಲಸ ಅಲ್ಲ. ಬಂದೋಬಸ್ತ್ಗೆಂದು ಪ್ರತಿ ಪೊಲೀಸ್ 15ರಿಂದ 25 ಕಿ.ಮೀ ತನಕ ತೆರಳುತ್ತಾನೆ. ಅಲ್ಲದೇ ಚಿಕ್ಕಮಗಳೂರಿನ ದತ್ತಪೀಠ, ಮೈಸೂರಿನ ದಸರಾ, ಬೆಳಗಾವಿ ಅಧಿವೇಶನ ಹಾಗೂ ಕೋಮು ಗಲಭೆ ನಡೆದರೆ ದೂರದ ಜಿಲ್ಲೆಗಳಿಗೆ ವಿಶೇಷ ಕರ್ತವ್ಯದ ಹೆಸರಿನಲ್ಲಿ ಕಳುಹಿಸುತ್ತಾರೆ. ನಮಗೂ ಪತ್ನಿ ಹಾಗೂ ಮಕ್ಕಳು ಇದ್ಧಾರೆ. ವಿಶೇಷ ಕರ್ತವ್ಯಕ್ಕೆ ತೆರಳಿದರೆ, ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆ ತರಲೂ ಯಾರೂ ಇರುವುದಿಲ್ಲ. ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ ಅನ್ನುವ ಸರ್ಕಾರವು ನಮ್ಮನ್ನೇಕೆ ಅಂತರ ಜಿಲ್ಲಾ ಕರ್ತವ್ಯಕ್ಕೆ ನಿಯೋಜಿಸಬೇಕು’ ಎಂದು ಪೊಲೀಸರು ಪ್ರಶ್ನಿಸಿದ್ಧಾರೆ.