ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವ್ಯತ್ಯಯ ನಾಳೆಯಿಂದ

Last Updated 25 ಜನವರಿ 2021, 19:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಚ್‌.ಎಸ್. ಆರ್. ಬಡಾವಣೆ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ವಿಭಾಗದ ಪ್ರದೇಶಗಳಲ್ಲಿ ಜ.27ರಿಂದ 30ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಅದೇ ರೀತಿ, ಜಯನಗರ ಉಪವಿಭಾಗ ವ್ಯಾಪ್ತಿಯ ಜೆ.ಪಿ.ನಗರ, ದಾಲ್ಮಿಯಾ ಸಿಗ್ನಲ್, ಡಾಲರ್ಸ್‌ ಬಡಾವಣೆ, ಪಿ.ಕೆ. ಕಾಲೊನಿ, ಧನ್ವಂತರಿ ಉದ್ಯಾನ, ಡಿ.ಎಸ್. ಪಾಳ್ಯ, ಮಾರೇನಹಳ್ಳಿ, ಬಿ.ಜಿ. ರಸ್ತೆ, ಸದಾನಂದಪ್ಪ ಕಾಂಪೌಂಡ್, ಶಾರದಾ ನಗರ, ಈಶ್ವರ ಬಡಾವಣೆ, ಶ್ರೀನಿವಾಸ ಛತ್ರ, ಚುಂಚಘಟ್ಟ ಮುಖ್ಯರಸ್ತೆ, ಬೀರಪ್ಪ ಗಾರ್ಡನ್, ಚರ್ಚ್‌ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.27ರಿಂದ 30ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್‌ ಪೂರೈಕೆ ಇರುವುದಿಲ್ಲ.

ಜಯದೇವ ಉಪವಿಭಾಗ ವ್ಯಾಪ್ತಿಯ ಐಎಎಸ್‌ ಕಾಲೊನಿ, ಮದೀನಾನಗರ, ಬಿಟಿಎಂ ಬಡಾವಣೆ ಎರಡನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.28ರಿಂದ 30ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT