<p><strong>ಬೆಂಗಳೂರು:</strong> ಪ್ರಭಾತ್ ಕಲಾವಿದರು ತಂಡದಿಂದ ಸಿಂಡ್ರೆಲಾ ನೃತ್ಯ ನಾಟಕ ಮರು ಪ್ರದರ್ಶನವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂನ್ 13ರ ಸಂಜೆ 7ಕ್ಕೆ ಹಮ್ಮಿಕೊಳ್ಳಲಾಗಿದೆ.</p>.<p>ಹರಿಕಥಾ ವಿದ್ವಾನ್ ಗೋಪಿನಾಥ ದಾಸರು 90 ವರ್ಷಗಳ ಹಿಂದೆ ಸ್ಥಾಪಿಸಿದ ಪ್ರಭಾತ್ ಕಲಾವಿದರು<br>ಸಂಸ್ಥೆಯು ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, ನಿರಂತರ ಪ್ರಯೋಗದ ಮೂಲಕ ಗಮನ ಸೆಳೆದಿದೆ.</p>.<p>1978ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಸಿಂಡ್ರೆಲಾ ರೂಪಕವು ಕರ್ನಾಟಕದ ಪ್ರಮುಖ ನೃತ್ಯ ನಾಟಕವಾಗಿದ್ದು, ಭಾರತದಾದ್ಯಂತ 1,000ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.</p>.<p>ನೃತ್ಯ ನಾಟಕ ಪಾಶ್ಚಾತ್ಯ ಕಥೆ ಆಧರಿಸಿದ್ದರೂ, ನಮ್ಮ ಮಣ್ಣಿನ ಸೊಗಡಿಗೆ ತಕ್ಕಂತೆ ಭಾರತೀಯ ಪಾತ್ರ<br />ಅಳವಡಿಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಯುವಿಲೈಟ್ ಎಫೆಕ್ಟ್ಸ್, ಏರಿಯಲ್ ಆಕ್ಟ್, ಸುಧಾರಿತ 3ಡಿ ವಿಷ್ಯುಯಲ್ಸ್ ತಂತ್ರಜ್ಞಾನ ಬಳಸಲಾಗಿದೆ. </p>.<p>ಮೈಸೂರು ಅನಂತ ಸ್ವಾಮಿ ಸಂಯೋಜಿಸಿದ ಸಂಗೀತಕ್ಕೆ ಪ್ರವೀಣ್ ಡಿ.ರಾವ್ ಮರುಜೀವ ನೀಡಿದ್ದಾರೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿಯೂ ಈ ರೂಪಕಕ್ಕೆ ಇದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಭಾತ್ ಕಲಾವಿದರು ತಂಡದಿಂದ ಸಿಂಡ್ರೆಲಾ ನೃತ್ಯ ನಾಟಕ ಮರು ಪ್ರದರ್ಶನವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂನ್ 13ರ ಸಂಜೆ 7ಕ್ಕೆ ಹಮ್ಮಿಕೊಳ್ಳಲಾಗಿದೆ.</p>.<p>ಹರಿಕಥಾ ವಿದ್ವಾನ್ ಗೋಪಿನಾಥ ದಾಸರು 90 ವರ್ಷಗಳ ಹಿಂದೆ ಸ್ಥಾಪಿಸಿದ ಪ್ರಭಾತ್ ಕಲಾವಿದರು<br>ಸಂಸ್ಥೆಯು ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, ನಿರಂತರ ಪ್ರಯೋಗದ ಮೂಲಕ ಗಮನ ಸೆಳೆದಿದೆ.</p>.<p>1978ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಸಿಂಡ್ರೆಲಾ ರೂಪಕವು ಕರ್ನಾಟಕದ ಪ್ರಮುಖ ನೃತ್ಯ ನಾಟಕವಾಗಿದ್ದು, ಭಾರತದಾದ್ಯಂತ 1,000ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.</p>.<p>ನೃತ್ಯ ನಾಟಕ ಪಾಶ್ಚಾತ್ಯ ಕಥೆ ಆಧರಿಸಿದ್ದರೂ, ನಮ್ಮ ಮಣ್ಣಿನ ಸೊಗಡಿಗೆ ತಕ್ಕಂತೆ ಭಾರತೀಯ ಪಾತ್ರ<br />ಅಳವಡಿಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಯುವಿಲೈಟ್ ಎಫೆಕ್ಟ್ಸ್, ಏರಿಯಲ್ ಆಕ್ಟ್, ಸುಧಾರಿತ 3ಡಿ ವಿಷ್ಯುಯಲ್ಸ್ ತಂತ್ರಜ್ಞಾನ ಬಳಸಲಾಗಿದೆ. </p>.<p>ಮೈಸೂರು ಅನಂತ ಸ್ವಾಮಿ ಸಂಯೋಜಿಸಿದ ಸಂಗೀತಕ್ಕೆ ಪ್ರವೀಣ್ ಡಿ.ರಾವ್ ಮರುಜೀವ ನೀಡಿದ್ದಾರೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿಯೂ ಈ ರೂಪಕಕ್ಕೆ ಇದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>