ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಅವರು, ಪ್ರಕರಣ ಸಂಬಂಧ ಕುಲಸಚಿವರಿಂದ (ಮೌಲ್ಯಮಾಪನ) ವರದಿ ತರಿಸಿಕೊಂಡಿದ್ದಾರೆ.
ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ನಕಲು ನಡೆದಿಲ್ಲವೆಂದು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಪ್ರಾಂಶುಪಾಲರು ಪರೀಕ್ಷೆಯ ವೇಳೆ ಇರಲಿಲ್ಲ ಎಂಬುದು ದೃಢಪಟ್ಟಿದೆ. ಪರೀಕ್ಷಾ ನಿಯಮಾವಳಿ ಪ್ರಕಾರ ಕರ್ತವ್ಯ ಲೋಪವಾಗಿದ್ದು, ಅವರನ್ನು ಮುಖ್ಯ ಅಧೀಕ್ಷಕ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಕುಲಸಚಿವರು ವರದಿಯಲ್ಲಿ ತಿಳಿಸಿದ್ದಾರೆ. ಜಾಗೃತದಳದ ಸಿಬ್ಬಂದಿಯಿಂದಲೂ ಮೌಖಿಕ ವರದಿ ಪಡೆದುಕೊಳ್ಳಲಾಗಿದೆ ಎಂದು ಲಿಂಗರಾಜು ಗಾಂಧಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.