ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವನೆಗಳನ್ನು ಮೀಟುವ ಕವನ’

Last Updated 9 ಏಪ್ರಿಲ್ 2022, 20:47 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಂತಲಾ ಅವರು ರಚಿಸಿರುವ ಕವನಗಳು ಮನ ಮಿಡಿಯುವಂತಿವೆ. ಓದುಗರ ಭಾವನೆಗಳನ್ನು ಮೀಟುವಂತಿವೆ’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್‌ ಅಭಿಪ್ರಾಯಪಟ್ಟರು.

ಸ್ನೇಹ ಕೃಪಾ ಮೂವೀಸ್‌ ಆಯೋಜಿಸಿದ್ದ ಶಾಂತಲಾ ಪಾಟೀಲ್‌ ಅವರ ‘ಪ್ರೇಮ ತರಂಗ’ ಕವನ ಸಂಕಲನ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.

‘ಶಾಂತಲಾ ಅವರ ಬರಹಗಳಲ್ಲಿ ಹೊಸತನವಿದೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.

ನಾಟಕಕಾರ ಸುಧಾಕರ ಬನ್ನಂಜೆ, ‘ಬರಹಕ್ಕೆ ಅಪಾರ ಶಕ್ತಿ ಇದೆ. ಒಂದು ಲೇಖನ ಸಮಾಜವನ್ನೇ ಬದಲಾವಣೆ ‌ಮಾಡಿದ ಉದಾಹರಣೆ ಇದೆ. ಡಿಜಿಟಲ್ ಮಾಧ್ಯಮ ಬಂದರೂ ಪುಸ್ತಕಗಳ ಬೇಡಿಕೆ ಕಡಿಮೆಯಾಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT