ಸರ್ಕಾರ ರಚಿಸಿರುವ ತನಿಖಾ ತಂಡಗಳಿಗೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಯಾಕೆ? ತನಿಖಾ ವರದಿಯಲ್ಲಿ ಯಾವ ನಿಗಮ ಎಷ್ಟು ದಾಖಲೆ ನೀಡಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ 30 ಪ್ಯಾಕೇಜ್ನಲ್ಲಿ 8 ಪ್ಯಾಕೇಜ್, ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮ 27 ಪ್ಯಾಕೇಜ್ ನಲ್ಲಿ 18 ಪ್ಯಾಕೇಜ್, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ 7 ಪ್ಯಾಕೇಜ್ ಪೈಕಿ 2ರ ಮಾಹಿತಿ ನೀಡಿದ್ದರೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು 14 ಪ್ಯಾಕೇಜ್ಗಳ ಪೈಕಿ ಒಂದರ ಮಾಹಿತಿಯನ್ನೂ ನೀಡದೇ ಇರುವುದು ವರದಿಯಲ್ಲಿದೆ’ ಎಂದು ಅವರು ವಿವರಿಸಿದರು.