‘ತೀವ್ರ ಜನದಟ್ಟಣೆ ಇರುವ ಈ ಪ್ರದೇಶಕ್ಕೆ ಮೆಟ್ರೊ ಮಾರ್ಗವಿಲ್ಲ. ಎಲಿವೇಟೆಡ್ ಕಾರಿಡಾರ್ ಯೋಜನೆ ಸ್ಥಗಿತಗೊಂಡಿದೆ. ಬಸ್ ಸೌಕರ್ಯ ಸಮರ್ಪಕವಾಗಿಲ್ಲ, ಉಪನಗರ ರೈಲು ಯೋಜನೆ ಸಂಪರ್ಕವಿಲ್ಲ. ಆದರೂ, ಹಲವು ಕಂಪನಿಗಳಿಗೆ ಅನುಮತಿ ನೀಡಲಾಗುತ್ತಿದೆ. ಒಂದು ಕಂಪನಿ ತಲೆ ಎತ್ತಿದರೆ ಕನಿಷ್ಠ 5 ಸಾವಿರ ಜನ ಈ ಭಾಗದಲ್ಲಿ ಸಂಚರಿಸಲಿದ್ದಾರೆ’ ಎಂದು ನಿವಾಸಿ ಶಾಲಿನಿ ಸುಶೀಲಾ ಹೇಳಿದರು.