‘ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಸಮುದಾಯದ 1 ಲಕ್ಷ ಮಂದಿ ಪಾದಚಾರಿ ಮಾರ್ಗಗಳಲ್ಲಿ, ರಸ್ತೆ ಬದಿಯಲ್ಲಿ ಡೇರೆ ನಿರ್ಮಿಸಿಕೊಂಡು, ಹೀನಾಯವಾಗಿ ಬದುಕುತ್ತಿದ್ದಾರೆ. ಇವರಿಗೆ ತುರ್ತಾಗಿ ಸಾಲ ಸೌಲಭ್ಯಗಳನ್ನು ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳು ನಿಗಮಕ್ಕೆ ನಿರ್ದೇಶನ ನೀಡಿದ್ದಾರೆ. ಆದರೂ, ಅದರ ಅನುಷ್ಠಾನ ಮಾಡುವಲ್ಲಿ ನಿಗಮದ ಅಧಿಕಾರಿಗಳು ಉತ್ಸಾಹ ತೋರಿಸದೇ ಅಲೆಮಾರಿ ವಿರೋಧಿ ಧೋರಣೆ ತೋರಿದ್ದಾರೆ’ ಎಂದು ಖಂಡಿಸಿದರು.