‘ಯಶವಂತಪುರ ಎಪಿಎಂಸಿಯಲ್ಲಿ ಲಾರಿಗಳು ನಿಲ್ಲುವುದಕ್ಕೆ ಜಾಗವಿಲ್ಲ. ಒಂದು ಲಾರಿಯ ಮೂಟೆ ಇಳಿಸುವುದಕ್ಕೆ ಕನಿಷ್ಠ ಮೂರರಿಂದ ನಾಲ್ಕು ಘಂಟೆಗಳು ಬೇಕು. ರಾತ್ರಿ ಹನ್ನೆರಡು ಘಂಟೆಯ ತನಕ ಕೆಲಸ ಮಾಡಿದರೂ 50 ರೂಪಾಯಿ ಕೂಲಿ ಸಿಗುವುದು ಕಷ್ಟ. ಸರ್ಕಾರವು ಇಲ್ಲಿಯ ಸಮಸ್ಯೆಗಳನ್ನು ಅರಿತು ದಾಸನಪುರದಲ್ಲಿ ಉಪ ಮಾರುಕಟ್ಟೆಯನ್ನು ತೆರೆಯಿತು. ಆದರೆ, ಅಲ್ಲಿಗೆ ಮಾರುಕಟ್ಟೆ ಸ್ಥಳಾಂತರ ಮಾಡದೇ, ಅಭಿವೃದ್ದಿ ಪಡಿಸದೇ ಬಡವರ ಬಾಳನ್ನು ಹಾಳುಗೆಡವಿತು’ ಎಂದು ಕಾರ್ಮಿಕೆ ರತ್ನಮ್ಮ ಬೇಸರ ವ್ಯಕ್ತಪಡಿಸಿದರು.