‘ಜೀವ ಉಳಿಸಿ, ಜೀವನೋಪಾಯ ರಕ್ಷಿಸಿ’ ಘೋಷವಾಕ್ಯದಡಿ ಸಿಪಿಐ (ಎಂಎಲ್), ಸಿಪಿಐಎಂ, ಎಸ್ಯುಸಿಐ (ಸಿ), ಎಐಎಫ್ಬಿ,ಎಐಸಿಸಿಟಿಯು, ಸ್ವರಾಜ್ ಇಂಡಿಯಾ ಮತ್ತು ಆರ್ಪಿಐ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು, ಮೈಸೂರು, ಕೊಡಗು, ಮಂಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸ್ಪಂದನೆ ವ್ಯಕ್ತವಾಯಿತು.