ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನೇಪಾಳದವರು ವಾಸವಿರುವ ಪ್ರದೇಶಗಳಲ್ಲಿಯ 50 ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಯಿತು. ನೇಪಾಳಕ್ಕೆ ಪರಾರಿಯಾಗಲು ಆರೋಪಿಯು ತಮಿಳುನಾಡಿನ ಸೇಲಂಗೆ ಹೋಗಿರುವುದಾಗಿ ಗೊತ್ತಾಯಿತು. ವಿಶೇಷ ತಂಡವು ಸೇಲಂಗೆ ಹೋದಾಗ, ವಿವೇಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಆರೋಪಿಯು ಗುವಾಹಟಿಗೆ ಪ್ರಯಾಣಿಸುತ್ತಿದ್ದ ವಿಷಯ ತಿಳಿಯಿತು.