‘ಈ ಚಳವಳಿ ತಡೆಯಲು ಚಿತ್ರ ಹಿಂಸೆ, ಕೊಲೆ, ಮರಣ ದಂಡನೆ, ದೈಹಿಕ ಹಲ್ಲೆ ನಡೆಸಲಾಗುತ್ತಿದೆ. ಮಹಿಳೆಯರು, ಮಕ್ಕಳನ್ನು ಬಂಧಿಸಲಾಗುತ್ತಿದೆ. ಇದು ಅತ್ಯಂತ ಹೇಡಿತನ ಹಾಗೂ ಖಂಡನೀಯ ಕೃತ್ಯ. ಇಷ್ಟಾದರೂ ಮಹಿಳೆಯರು ಹಿಂಜರಿಯದೇ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟವು ಉಳಿದ ಎಲ್ಲ ಹೋರಾಟಕ್ಕೂ ಸ್ಫೂರ್ತಿ ಆಗಬೇಕು’ ಎಂದು ಕರೆ ನೀಡಿದರು.