'2011ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿದ್ದರು. ಆದರೆ, ಸ್ವಾಮಿನಾಥನ್ ಆಯೋಗ ಸೂಚಿಸಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಇಂದು ಅವರೇ ನಿರಾಕರಿಸುತ್ತಿರುವುದು ರೈತ ವಿರೋಧಿ ಧೋರಣೆಗೆ ಕೈಗನ್ನಡಿ. ಕೃಷಿ ಕ್ಷೇತ್ರದಲ್ಲಿದ್ದ ನಿಯಂತ್ರಣಗಳನ್ನು ಸಂಪೂರ್ಣವಾಗಿ ನಾಶಗೊಳಿಸಿ, ರೈತರು ಕಾರ್ಪೊರೇಟ್ ಧನದಾಹಿಗಳ ಅನುಕಂಪಕ್ಕೆ ಒಳಗಾಗುವಂತೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ' ಎಂದು ಆರೋಪಿಸಿದರು.