ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ‘ರಾಜರ ಕಾಲದಲ್ಲಿ ಸಿಕ್ಕಿದಂತಹ ಪ್ರೋತ್ಸಾಹ ಇಂದಿನ ಯುವ ಶಿಲ್ಪ ಕಲಾವಿದರಿಗೆ ಸಿಕ್ಕಲ್ಲಿ, ಜಕಣಾಚಾರಿಯಂತಹ ಶ್ರೇಷ್ಠ ಶಿಲ್ಪಿಗಳು ಹುಟ್ಟುತ್ತಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅದ್ಭುತವಾದ ಶಿಲ್ಪಕಲಾಕೃತಿ ರಚಿಸುವ ಕಲಾವಿದರು ರಾಜ್ಯದಲ್ಲಿದ್ದು, ಶಿಲ್ಪಕಲೆ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದರು.