ಬೆಂಗಳೂರು: ಮೈಸೂರಿನ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಪಿಆರ್ಟಿ ಕಲಾ ಪ್ರಶಸ್ತಿ’ಗೆ ಧಾರವಾಡದ ಗಾಯತ್ರಿ ದೇಸಾಯಿ ಹಾಗೂ ‘ಪಿಆರ್ಟಿ ಜಾನಪದ ಪ್ರಶಸ್ತಿ’ಗೆ ಬಂಟ್ವಾಳದ ಪಿ.ತುಕಾರಾಮ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗಳು ತಲಾ ₹25 ಸಾವಿರ, ಫಲಕ ಒಳಗೊಂಡಿವೆ. ಡಿ.2ರಂದು ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.