ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪು ಗೌರವಾರ್ಥ ಬೈಕ್ ಜಾಥಾ

Last Updated 30 ಅಕ್ಟೋಬರ್ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು: ‍ಪುನೀತ್ ರಾಜ್‌ಕುಮಾರ್ ಗೌರವಾರ್ಥ ಹಾಗೂ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘3ಎಸ್ ಇವೆಂಟ್‌ ಮತ್ತು ಎಬಿಸಿ ಇಂಡಿಯಾ’ ಸಹೋಗದಲ್ಲಿ 1000 ಬೈಕ್‌ಗಳ ಜಾಥಾ ಭಾನುವಾರ ನಡೆಯಿತು.

‘ಅಕ್ಟೋಬರ್ ಬೈಕರ್ಸ್ ಫೆಸ್ಟ್ 2022’ ಹೆಸರಿನಲ್ಲಿ ಈ ಜಾಥಾ ಆಯೋಜಿಸಲಾಗಿತ್ತು.

ಜಾಥಾಗೆ ಟಿವಿಎಸ್ ಯುರೋ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾಧವನ್, ಟಿವಿಎಸ್‌ ಹಿರೋ ಸಂಸ್ಥೆ ವಿಭಾಗದ ವ್ಯವಸ್ಥಾಪಕ ಕೆ.ವಿ. ಉನ್ನಿಕೃಷ್ಣನ್‌ ಮತ್ತು ಜೆಕೆ ಗ್ರ್ಯಾಂಡ್‌ ಅರೇನಾ ಸಿಇಒ ಜಿ. ಕೃಷ್ಣಪ್ಪ ಚಾಲನೆ ನೀಡಿದರು.

ನಾಯಂಡಹಳ್ಳಿಯ ನಂದಿ ಲಿಂಕ್‌ ಆಟದ ಮೈದಾನದಿಂದ ಕೆಂಗೇರಿಯವರೆಗೂ 10 ಕಿ.ಮೀ ಬೈಕ್‌ ಜಾಥಾ ನಡೆಯಿತು. 500ಕ್ಕೂ ಹೆಚ್ಚು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಪುನೀತ್‌ ರಾಜ್‌ಕುಮಾರ್ ಅವರ ಚಿತ್ರಗಳ ಗಾಯನ, ಇಂಟರ್‌ ಬೈಕ್‌ ಕ್ಲಬ್‌ಗಳ ಸ್ಪರ್ಧೆ, ಅಬ್‌ಸ್ಟಿಕಲ್ ರೇಸ್, ಫಿಟ್ನೆಸ್‌, ಫ್ಯಾಷನ್ ಷೊ ಮತ್ತು ಮೋಟರ್‌ ಬೈಕ್‌ ಬಿಡಿ ಭಾಗಗಳ ಪ್ರದರ್ಶನವನ್ನು ಜಾಥಾ ಅಂಗವಾಗಿ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT