ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಿಜ್‌: ನಾಳೆ ಅಂತಿಮ ಸುತ್ತು

Last Updated 28 ಜನವರಿ 2020, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸುತ್ತಿನ ಸ್ಪರ್ಧೆ ಗುರುವಾರ (ಜ.30) ನಗರದ ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.

ರಾಜ್ಯದ 11 ವಲಯಗಳಲ್ಲಿ ಕ್ವಿಜ್‌ ಚಾಂಪಿಯನ್‌ಷಿಪ್‌ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಂತಿಮ ಸುತ್ತಿಗೆ ಈ 11 ತಂಡಗಳ 22 ಮಂದಿ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

ಗುರುವಾರಬೆಂಗಳೂರು ವಲಯದ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳು) ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.ಬೆಳಿಗ್ಗೆ8.30ರಿಂದ ನೋಂದಣಿ ಆರಂಭವಾಗುತ್ತದೆ. ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ (ಬಿಎಎಂಯುಎಲ್‌) ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಬಿಡದಿಯ ಶಿವದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌ನ ಮಾಲೀಕ ಬಿ.ಸಿ.ಶಶಿಕುಮಾರ್‌ ಪಾಲ್ಗೊ
ಳ್ಳುವರು. 12.30ರಿಂದ ಬೆಂಗಳೂರು ವಲಯ ಮಟ್ಟದ ಕ್ವಿಜ್‌ ಚಾಂಪಿಯನ್‌
ಷಿಪ್‌ನ ಅಂತಿಮ ಹಣಾಹಣಿ ನಡೆಯ
ಲಿದ್ದು, ದೀಕ್ಷಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ್‌, ಬಿಬಿಎಂಪಿಯ ವಿಶೇಷ ಆಯುಕ್ತ (ಯೋಜನೆಗಳು) ರವಿ
ಕುಮಾರ್ ಸುರಪುರ್‌ಪಾಲ್ಗೊಂಡುವಲಯ ಮಟ್ಟದ ವಿಜೇತರಿಗೆ ಬಹು
ಮಾನ ವಿತರಿಸುವರು.

ಬೆಂಗಳೂರು ವಲಯದಿಂದ ಆಯ್ಕೆಯಾದತಂಡ ಸೇರಿದಂತೆ ಒಟ್ಟು 12 ತಂಡಗಳನ್ನು ಒಳಗೊಂಡ ಕ್ವಿಜ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ ಸ್ಪರ್ಧೆಗಳು ಮಧ್ಯಾಹ್ನ 2.30ರಿಂದ ಆರಂಭವಾಗಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ಹಾಜರಿದ್ದು ಅಂತಿಮ ಹಣಾಹಣಿಯನ್ನು ವೀಕ್ಷಿಸಿ ವಿಜೇತ
ರಿಗೆಬಹುಮಾನ ವಿತರಿಸಲಿದ್ದಾರೆ.

ವಿಜೇತ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ಇದೆ. 2ನೇ ಬಹು
ಮಾನ ₹ 30 ಸಾವಿರ, 3ನೇ ಬಹುಮಾನ ₹ 10 ಸಾವಿರ, 4ನೇ ಬಹುಮಾನ ₹ 6 ಸಾವಿರ, 5ನೇ ಬಹುಮಾನ ₹ 4 ಸಾವಿರ ನೀಡಲಾಗುವುದು.

10ನೇ ತರಗತಿವರೆಗಿನ ವಿದ್ಯಾರ್ಥಿ
ಗಳು ಸ್ಪರ್ಧೆಯಲ್ಲಿ ‍‍ಪಾಲ್ಗೊಳ್ಳಬಹುದು. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಕೋಲಾರ ವ್ಯಾಪ್ತಿಯ ಶಾಲೆಗಳು ಸ್ಪರ್ಧೆಯ ಬಗ್ಗೆ ಮಾಹಿತಿಗೆ 9606912242, 9742284543 ಸಂಪರ್ಕಿಸಬಹುದು.

ಶ್ರೀ ಶಿವ ದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌, ಬಿಡದಿ ಇವರು ಆಹಾರ ವಿತರಣೆಯ ಪಾಲುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT