‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆ ಯಲ್ಲಿ ಪ್ರಕಟವಾದ ‘ಬಿಡಿಎ ಅಕ್ರಮ: ತನಿಖೆಗೆ ಅಡ್ಡಗಾಲು’ ವಿಶೇಷ ವರದಿ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಬಿಡಿಎ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು, ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ದ್ದಾರೆ. ಈ ಪ್ರಸ್ತಾವಗಳನ್ನು ಬಿಡಿಎ ಆಂತರಿಕ ಜಾಗೃತ ಕೋಶಕ್ಕೆ ಕಳುಹಿಸಿದ್ದು, ವರದಿ ಬಂದ ತಕ್ಷಣ ತಡಮಾಡದೇ ತನಿಖೆಗೆ ಅನುಮತಿ ನೀಡಲಾ ಗುವುದು’ ಎಂದು ಹೇಳಿದ್ದಾರೆ.