ಬೆಂಗಳೂರು: ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್ಸೀಮಂತದ ಸಂಭ್ರಮದಲ್ಲಿದ್ದಾರೆ. ಚಂದನವನದ ಮುದ್ದಾದ ಜೋಡಿ ಎಂದೇ ಕರೆಸಿಕೊಳ್ಳುವ ಯಶ್–ರಾಧಿಕಾ ಮದುವೆಯಾದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿಯೇಈ ಸೀಮಂತ ಶಾಸ್ತ್ರಗಳು ನಡೆಯುತ್ತಿವೆ.
ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೆಯುತ್ತಿದ್ದು,ಕಾರ್ಯಕ್ರಮದಲ್ಲಿ ಯಶ್ ಕುಟುಂಬದವರು, ಸ್ನೇಹಿತರುಮತ್ತುಸ್ಯಾಂಡಲ್ವುಡ್ನ ಕಲಾವಿದರು ಭಾಗಿಯಾಗಿದ್ದಾರೆ. ಪುನೀತ್ ರಾಜ್ಕುಮಾರ್ ದಂಪತಿಯೂ ಈ ಸಮಾರಂಭದಲ್ಲಿ ಭಾಗಿಯಾಗಿ ರಾಧಿಕಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಮಗು ಜನನಕ್ಕೆ ವೈದ್ಯರು ಡಿ.9ರಂದು ಡೇಟ್ ಕೊಟ್ಟಿದ್ದಾರೆ. ಈ ತಾರಾ ಜೋಡಿಗಳು ಮದುವೆಯಾದ ದಿನವೇ ರಾಂಕಿಂಗ್ ಸ್ಟಾರ್ ಮನೆಗೆ ಕಂದಮ್ಮನ ಎಂಟ್ರಿ ಆಗಲಿದೆ.ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಸಹ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.