ಮುಂಬೈ ಮೂಲದ ವೈದ್ಯರಾದ ರಾಜೀವ್ ಸರಿನ್ ಮತ್ತು ಪ್ರದೀಪ್ ಚೌಧರಿ ಇಲ್ಲಿ ಕೇಂದ್ರ ತೆರೆಯಲು ನೆರವು ನೀಡಲಿದ್ದಾರೆ. ‘ಬೆಂಗಳೂರು, ಚೆನ್ನೈ, ದೆಹಲಿ ಹಾಗೂ ಪುಣೆಯಿಂದ ಮುಂಬೈಗೆ ಪ್ರಾಣಿಪ್ರಿಯರು ಬರುತ್ತಾರೆ. ಅವರಿಗೆ ಪ್ರಯಾಣ ಮಾಡಲು ಸಾಕಷ್ಟು ತೊಂದರೆಯಾಗುತ್ತದೆ. ಅವರಲ್ಲಿ ಕೆಲವರು ನಾಯಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಸಾಕುತ್ತಾರೆ. ಚಿಕಿತ್ಸೆಗಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ತಯಾರಿರುತ್ತಾರೆ’ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಸರಿನ್ ಹೇಳಿದರು.