ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ದೇಶದ ಅತ್ಯಂತ ದೊಡ್ಡ ರಕ್ಷಣಾ ಹಗರಣ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.
ಈ ಹಗರಣದಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಲಾಭವಾಗಿದೆ. ಅವರ ಸ್ನೇಹಿತ ಅನಿಲ್ ಅಂಬಾನಿಗೆ ಈ ಹಗರಣದಲ್ಲಿ ₹21,000ಕೋಟಿ ಕಮಿಷನ್ ಸಿಕ್ಕಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.
ಫ್ರಾನ್ಸ್ನ ಡಸಾಲ್ಟ್ ಕಂಪನಿ ಜತೆಗೆ ನೇರವಾಗಿ ಮೋದಿಯವರೇ ಡೀಲ್ ಮಾಡಿದ್ದಾರೆ. ರಕ್ಷಣಾ ಸಚಿವರಿಗಾಗಲಿ , ಏರ್ ಚೀಫ್ ಮಾರ್ಷಲ್ ಅವರಿಗಾಗಲಿ ಈ ವ್ಯವಹಾರದ ಮಾಹಿತಿ ಇಲ್ಲ. ಅವರನ್ನು ಕತ್ತಲಲ್ಲಿ ಇಟ್ಟು ಮೋದಿ ಈ ವ್ಯವಹಾರ ನಡೆಸಿದ್ದಾರೆ ಎಂದರು.