ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಬೌನ್ಸ್: ರಾಘವೇಂದ್ರ ಶೆಟ್ಟಿಗೆ ಸಮನ್ಸ್

Last Updated 26 ಮೇ 2022, 18:16 IST
ಅಕ್ಷರ ಗಾತ್ರ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಕಚೇರಿಗೆ ಶಿರಸಿ ಪೊಲೀಸರು ಸಮನ್ಸ್ ಪ್ರತಿ ಅಂಟಿಸಿ ಹೋಗಿದ್ದಾರೆ.

ವೈಯಕ್ತಿಕ ಹಣಕಾಸು ವ್ಯವಹಾರ ಸಂಬಂಧವ್ಯಕ್ತಿಯೊಬ್ಬರಿಗೆ ರಾಘವೇಂದ್ರ ಶೆಟ್ಟಿ ಅವರು ಚೆಕ್‌ ನೀಡಿದ್ದರು. ಅದು ಬೌನ್ಸ್ ಆಗಿದ್ದರಿಂದ ಆ ವ್ಯಕ್ತಿ, ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಗಾಗಿ ರಾಘವೇಂದ್ರ ಶೆಟ್ಟಿ ಅವರಿಗೆ 4 ಬಾರಿ ಸಮನ್ಸ್ ಜಾರಿಯಾಗಿತ್ತು. ಅಷ್ಟಾದರೂ ಅವರು ವಿಚಾರಣೆಗೆಹಾಜರಾಗಿರಲಿಲ್ಲ.

ನ್ಯಾಯಾಲಯದ ಖಡಕ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿರುವ ರಾಘವೇಂದ್ರ ಶೆಟ್ಟಿ ಅವರ ಕಚೇರಿಗೆ ಬಂದ ಪೊಲೀಸರು ಬುಧವಾರ ಸಮನ್ಸ್ ಪ್ರತಿ ಅಂಟಿಸಿ, ಅದರಫೋಟೊ ಹಾಗೂ ವಿಡಿಯೊ ಸಮೇತ ಮಹಜರು ಮಾಡಿಕೊಂಡುಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT