‘ಎಲ್ಲಾ ವಲಯ ನಿಯಂತ್ರಣ ಕೊಠಡಿಗಳಲ್ಲಿ ಅವಶ್ಯಕ ಪರಿಕರಗಳು, ಯಂತ್ರೋಪಕರಣಗಳು ಲಭ್ಯ ಇರಬೇಕು. ಸಿಬ್ಬಂದಿಯೂ ಸನ್ನದ್ಧವಾಗಿರಬೇಕು.ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕಂದಾಯ, ಆರೋಗ್ಯ, ಕಸ ವಿಲೇವಾರಿ ವಿಭಾಗಗಳ ಅಧಿಕಾರಿಗಳು ಹಾಗೂ ಮಾರ್ಷಲ್ಗಳ ಸೇವೆಯನ್ನೂ ಬಳಸಿಕೊಳ್ಳಬೇಕು. ಮಳೆಯಿಂದ ಎದುರಾಗುವ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಆಯಾ ವಲಯದ ಹಿರಿಯ ಅಧಿಕಾರಿ
ಗಳು ಸಭೆ ನಡೆಸಬೇಕು’ ಎಂದು ಸೂಚನೆ ನೀಡಿದರು. ‘ಮಳೆ ಬಂದಾಗ ನೀರು ನಿಲ್ಲುವ ಸಂಭಾವ್ಯ ಜಾಗಗಳನ್ನು ಗುರುತಿಸಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ನಿಯಂತ್ರಣ ಕೊಠಡಿಗಳಿಗೆ ಕರೆ ಬಂದ ಕೂಡಲೇ ಪಾಲಿಕೆಯ ತುರ್ತು ಸ್ಪಂದನೆ ತಂಡವು ಸ್ಥಳಕ್ಕೆ ಧಾವಿಸಬೇಕು. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ತೆ ಕಲ್ಪಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು’ ಎಂದು ಸೂಚನೆನೀಡಿದರು.