ವಿವಿಧ ರಾಜ್ಯಗಳಲ್ಲಿನ ‘ಎಎಆರ್’ಗಳು ಮಾರ್ಚ್ ತಿಂಗಳಿನಿಂದೀಚೆಗೆ ಆದೇಶ ನೀಡಲು ಆರಂಭಿಸಿವೆ. ಹೀಗಾಗಿ ಮೇಲ್ಮನವಿ ಪ್ರಾಧಿಕಾರ ರಚಿಸುವುದು ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನಿವಾರ್ಯವಾಗಿದೆ. ಮೇಲ್ಮನವಿ ಪ್ರಾಧಿಕಾರಗಳಿಗೆ ಸದಸ್ಯರನ್ನು ನಾಮಕರಣ ಮಾಡಬೇಕೆಂದು ಸೂಚಿಸಿ ಜಿಎಸ್ಟಿ ಮಂಡಳಿಯು ರಾಜ್ಯ ಸರ್ಕಾರಗಳು, ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ನ ಕೇಂದ್ರೀಯ ಮಂಡಳಿಗೆ ಪತ್ರ ಬರೆದಿದೆ.